Tuesday, December 29, 2015

ಅನ್ವೇಷಣೆ: ಪುಸ್ತಕ ಬಿಡುಗಡೆ


  




ದಿನಾಂಕ ೨೭. ೧೨. ೨೦೧೫ ರಂದು ನನ್ನ ಆರನೇ ಕೃತಿ 'ಅನ್ವೇಷಣೆ' ಬಿಡುಗಡೆಯಾಯಿತು. ಕಲಬುರಗಿಯ ಶ್ರೀ ಸಿದ್ಧಲಿಂಗೇಶ್ವರ ಪ್ರಕಾಶನ ಸಂಸ್ಥೆ ಪ್ರಕಟಿಸುತ್ತಿರುವ ನನ್ನ ನಾಲ್ಕನೇ ಕೃತಿಯಿದು. ಇನ್ನುಳಿದ ಎರಡು ಪುಸ್ತಕಗಳು ಬಾಗಲಕೋಟೆಯಲ್ಲಿ ಪ್ರಕಟವಾಗಿವೆ. ಇನ್ನು ಅನ್ವೇಷಣೆ ಕೃತಿಯ ಕುರಿತು ಹೇಳುವುದಾದರೆ ಇಲ್ಲಿನ ಎಲ್ಲ ಲೇಖನಗಳು ನಾನು ನನ್ನ ಬ್ಲಾಗಿಗೆ ಬರೆದವುಗಳು. ಈ ಬ್ಲಾಗಿಗೆ ಬರೆಯುವಾಗಲೆಲ್ಲ ನಾನು ಪತ್ರಿಕೆಯೊಂದಕ್ಕೆ ಬರೆಯುವ ಬದ್ಧತೆಯಿಂದಲೇ ಬರವಣಿಗೆಯಲ್ಲಿ ತೊಡಗಿಸಿಕೊಳ್ಳುತ್ತೇನೆ. ಬ್ಲಾಗ್ ಬರವಣಿಗೆಯನ್ನು ಸಮಾಜಕ್ಕೆ ಮುಖಾಮುಖಿಯಾಗಿ ನಿಲ್ಲಿಸುವ ಕಾಳಜಿ ನನ್ನದು. 

ಇನ್ನು ನನ್ನ ಪುಸ್ತಕಗಳ ಪ್ರಕಟಣೆಯ ವಿಷಯವಾಗಿ ನಾನು ಕೃತಜ್ಞತೆಯಿಂದ ಸ್ಮರಿಸಿಕೊಳ್ಳಬೇಕಾದ ವ್ಯಕ್ತಿತ್ವ ಶ್ರೀ ಬಸವರಾಜ ಕೊನೇಕ ಅವರದು. ಕಲಬುರಗಿಯಲ್ಲಿ ಪ್ರಕಾಶನ ಸಂಸ್ಥೆ ಮತ್ತು ಬೃಹತ್ ಪುಸ್ತಕ ಮಳಿಗೆಯನ್ನು ಸ್ಥಾಪಿಸಿ ಅವರು ಮಾಡುತ್ತಿರುವ ಕನ್ನಡದ ಈ ಕೆಲಸ ನಿಜಕ್ಕೂ ಅಭಿನಂದನಾರ್ಹ. ಅವರ ಈ ಕನ್ನಡದ ಸೇವಾ ಕೈಂಕರ್ಯ ನಿರಂತರವಾಗಿ ಮುಂದುವರೆಯಲಿ. 

ನನ್ನ ಬರವಣಿಗೆಯ ಬದುಕಿನಲ್ಲಿ ನನ್ನ ಜೊತೆಗೆ ನಿಂತು ಸಹಕರಿಸುತ್ತಿರುವವರಿಗೆಲ್ಲ ನಾನು ಈ ಸಂದರ್ಭ ಕೃತಜ್ಞತೆಗಳನ್ನು ಸಮರ್ಪಿಸುತ್ತೇನೆ. 








-ರಾಜಕುಮಾರ. ವ್ಹಿ. ಕುಲಕರ್ಣಿ (ಕುಮಸಿ), ಬಾಗಲಕೋಟೆ